Wednesday, June 17, 2020

ಶ್ರೀರಂಗ ವಚನಾಮೃತ (Sriranga Vachanamruta) - 609

ಸತ್ಯವೂ ಸುಂದರವೂ ಮತ್ತು ಮಂಗಳಕರವೂ ಆದ ಭಗವಂತ ಭಗವತಿಯರ ದಿವ್ಯಾನಂದ, ದಿವ್ಯಜೀವನದ ಅಂಕಿತದೊಡನೆ ವಿಶ್ವದ ಪ್ರಜೆಗಳೆಲ್ಲಾ ಜೀವನ ಮಾಡಬೇಕೆಂಬ ಹೆಬ್ಬಯಕೆಯಿಂದ ಭಾರತಭೂಮಿಯಲ್ಲಿ ತಮ್ಮ ಮಹಾತಪಸ್ಯೆಯಿಂದ ಮನೀಷಿಗಳಾದ ಮಹರ್ಷಿಗಳು ದಿವ್ಯಜೀವನವನ್ನು ಕಂಡುಕೊಂಡು ತಮ್ಮ ಐಹಿಕ ಪಾರಮಾರ್ಥಿಕ ಬಾಳಾಟಕ್ಕೆ ನಂದನವನದಂತಿರುವ ಭಾರತ ಭೂಮಿಯನ್ನು ಸೃಷ್ಟಿಸಹಜವಾಗಿಯೂ, ಭಗವತ್ಸಂಕಲ್ಪಕ್ಕನುಗುಣವಾಗಿಯೂ ಪುರುಷಾರ್ಥಗಳಿಗೆ ನಿರುಪಾಧಿಕವಾದ ಜಾಗವಾಗಿ ಮಾಡಿಕೊಂಡು ತಮ್ಮ ಒಂದು ರಾಜ್ಯವನ್ನು ಕಟ್ಟಿಕೊಂಡರು.  


To know more about Astanga Yoga Vijnana Mandiram (AYVM) please visit our Official Website, Facebook and Twitter pages