Tuesday, June 27, 2023

ಶ್ರೀರಂಗ ವಚನಾಮೃತ (Sriranga Vachanamruta)

ಧ್ಯೇಯ ಒಂದೇ ಆಗಿದ್ದರೆ ದೇಶದಲ್ಲಿ ಒಗ್ಗಟ್ಟು ಉಳಿಯುತ್ತದೆ. ಸಂಗೀತಗಾರನ ಮನೋಧರ್ಮವನ್ನು ಅನುಸರಿಸಿ ಮೃದಂಗ, ಪಿಟೀಲು, ಘಟ ಎಲ್ಲವನ್ನೂ ನುಡಿಸಿದರೆ ಪಕ್ಕವಾದ್ಯವಾಗುತ್ತದೆ. ಪಕ್ಕದಲ್ಲಿ ಕುಳಿತಿದ್ದರೂ ಸಂಗೀತಗಾರನು ಹಾಡುವುದೇ ಒಂದು, ಇವನು ನುಡಿಸುವುದೇ ಒಂದಾದರೆ ಪಕ್ಕವಾದ್ಯ ವಾಗಲಾರದು. ಸಂಗೀತಗಾರನು ಹಾಡುವ ಹಾಡನ್ನು ವಾದ್ಯಗಳ ಮೂಲಕ ತರುವ ಧ್ಯೇಯ ಒಂದಾಗಿದ್ದರೆ ಅಲ್ಲಿ ಒಡಕಿಗೆ ಅವಕಾಶವಿಲ್ಲ. ಅಂತೆಯೇ ಪುರುಷಾರ್ಥಕ್ಕನುಗುಣವಾದ ಬಾಳಾಟವೇ ಧ್ಯೇಯವಾಗಿದ್ದರೆ ಅಲ್ಲಿ ಒಡಕಿಗೆ ಅವಕಾಶವಿಲ್ಲ.


To know more about Astanga Yoga Vijnana Mandiram (AYVM) please visit our Official Website, Facebook and Twitter pages