Monday, June 8, 2020

ಶ್ರೀರಂಗ ವಚನಾಮೃತ (Sriranga Vachanamruta) - 600

ಷೋಡಶರಾಜರಲ್ಲಿ ಪ್ರಸಿದ್ಧನೂ,ಧರ್ಮಮೂರ್ತಿಯೂ ಆದ ಇಕ್ಷ್ವಾಕು ರಾಮನಿಂದ ಯಾವ ಈ ಭಾರತವಸುಂಧರೆಯು ತ್ರಿಲೋಕಿಯೂ ಸಹ ನಿಷ್ಕಂಟಕವಾಗಿ ಏಕೀಭಾವದಿಂದಿರಿಸಲ್ಪಟ್ಟು "ಪ್ರಾಣಾಪಾನೌ ಸಮಾವಾಸ್ತಾಂ ರಾಮೇ ರಾಜ್ಯಂ ಪ್ರಶಾಸ್ಯತಿ" ಎಂಬಂತೆ ತನ್ನ ಪ್ರಜೆಗಳನ್ನೆಲ್ಲಾ ಆತ್ಮಾರಾಮರನ್ನಾಗಿಯೂ, ಭಾರತರನ್ನಾಗಿಯೂ ಮಾಡಿಕೊಂಡಿತ್ತೋ, ಯಾವ ಭೂಮಿಯು ಇಂದಿಗೂ ಅಂತಹ ಶ್ರೀರಾಮನ ಅಯೋಧ್ಯೆಯನ್ನೊಳಗೊಂಡ ಪ್ರಕೃತಿಸಿದ್ಧವಾದ ಶ್ರೀಯನ್ನೂ ಅಪ್ರಾಕೃತವಾದ ಆತ್ಮಶ್ರೀಯನ್ನೂ ಸಹ ಬೆಳಗಿಸುವಂತೆ ಇದೆಯೋ, ಅಂತಹ ಆಸೇತುಶೀತಾಚಲವಾಗಿ ಹರಡಿರುವ ಸನಾತನಾರ್ಯಭಾರತಭೂಮಿಯನ್ನು ಮತ್ತೆ ನೆನಪಿಗೆ ತಂದುಕೊಳ್ಳೋಣ. 

 


To know more about Astanga Yoga Vijnana Mandiram (AYVM) please visit our Official Website, Facebook and Twitter pages