Sunday, May 31, 2020

ಶ್ರೀರಂಗ ವಚನಾಮೃತ (Sriranga Vachanamruta) - 592

ತಂದೆ ತಾಯಿಗಳು ಮಗುವಿನ ಕೈಗೆ ತಿಂಡಿಕೊಟ್ಟು ನನಗೊಂದು ಸ್ವಲ್ಪ ಕೊಡಮ್ಮ ಎಂದು ಕೇಳುತ್ತಾರೆ. ಇದು ಕಿತ್ತುಕೊಳ್ಳುವುದಕ್ಕಲ್ಲ. ಆ ಮಗುವು ದೊಡ್ಡದಾದ ಮೇಲೆ ತನ್ನ ಮಗುವಿಗೆ ಇತರರಿಗೆ ಕೊಡುವ ಧರ್ಮವಿದೆಯೇ ಎಂದು ಪರೀಕ್ಷಿಸುವುದಕ್ಕೆ ಹಾಗೆ ಕೇಳುತ್ತಾರೆ. ಭಗವಂತನು ನಮ್ಮಿಂದ ಪತ್ರಂ, ಪುಷ್ಪಂ. ಫಲಂ ತೋಯಂಗಳನ್ನು ಯಾಚಿಸಬೇಕಿಲ್ಲ. ಅವನು ತಾನು ಸೃಷ್ಟಿಮಾಡಿದ ಸಾವಿರಾರು ಗಿಡಗಳ ತುಳಸಿಯನ್ನು ರಾಶಿ ರಾಶಿಯನ್ನು ಮೇಯಬಾರದೇ? ಭಕ್ತನನ್ನೇ ಒಂದು ದಳ ತುಳಸಿಯನ್ನೇಕೆ ಕೇಳುತ್ತಾನೆ? ಅವನಿಗೆ ಕೃತಜ್ಞತೆಯ ಧರ್ಮ ಬೆಳೆಯುವಂತೆ ಮಾಡುವುದಕ್ಕೆ.  


To know more about Astanga Yoga Vijnana Mandiram (AYVM) please visit our Official Website, Facebook and Twitter pages