Saturday, May 9, 2020

ಶ್ರೀರಂಗ ವಚನಾಮೃತ (Sriranga Vachanamruta) - 570

ನೀವು ಸಮರ್ಪಿಸುವ ನೋಟುಗಳು ಅಥವಾ ನಾಣ್ಯಗಳು ಭಗವದರ್ಪಿತ ವಾಗುವುದು ಹೇಗೆ? ಭಗವಂತನ ದಿವ್ಯರಾಜ್ಯದಲ್ಲಿ ಇವುಗಳಿಗೆ ಚಲಾವಣೆಯುಂಟೇ? ಈ ಪ್ರಪಂಚದಲ್ಲೇ ಒಂದು ದೇಶದ ನಾಣ್ಯಕ್ಕೆ ಮತ್ತೊಂದು ದೇಶದಲ್ಲಿ ಚಲಾವಣೆ ಇಲ್ಲ. ಅದನ್ನು ಬೇರೆ ದೇಶದ ನಾಣ್ಯವನ್ನಾಗಿ ಬದಲಾಯಿಸಿಕೊಳ್ಳಲು ಒಂದು ಬ್ಯಾಂಕು ಇದೆ. ಹೀಗೆಯೇ ಜ್ಞಾನಿಗೆ ಸಮರ್ಪಿತವಾದರೆ ಈ ಭೌತಿಕ ಪದಾರ್ಥವು ಬ್ರಾಹ್ಮ ಮನೋಧರ್ಮವೆಂಬ ರೂಪವನ್ನು ತಾಳುತ್ತದೆ. ಅದಕ್ಕೆ ತಾನೇ ಭಗವಂತನ ರಾಜ್ಯದಲ್ಲಿ ಚಲಾವಣೆ.


To know more about Astanga Yoga Vijnana Mandiram (AYVM) please visit our Official Website, Facebook and Twitter pages