Monday, April 27, 2020

ಶ್ರೀರಂಗ ವಚನಾಮೃತ (Sriranga Vachanamruta) - 558

ಭಗವಂತನ ಸೇವೆಗಾಗಿ ಅರ್ಥವನ್ನು ಸಂಪಾದಿಸಿ ವಿನಿಯೋಗಮಾಡಬೇಕು. ಹಾಗೆ ವಿನಿಯೋಗಮಾಡುವವನು ವಿವೇಕಿಯಾಗಿರಬೇಕು. ಸೇವೆಗೆ ಅಧಿಕಾರಿ ಯಾಗಿರಬೇಕು. ಕ್ಷಣಶಃ ಕಣಶಶ್ಚೈವ ವಿದ್ಯಾಮರ್ಥಂಚ ಸಾಧಯೇತ್, [ಕ್ಷಣಕ್ಷಣದಲ್ಲಿಯೂ ಮತ್ತು ಕಣಕಣವಾಗಿಯೂ ವಿದ್ಯೆಯನ್ನೂ ಮತ್ತು ಸಂಪತ್ತನ್ನೂ ಸಾಧಿಸಬೇಕು-ಸುಭಾಷಿತ] ಮೊದಲು ವಿದ್ಯೆ. ಆಮೇಲೆ ಅರ್ಥ, ಸಂಪಾದಿಸಿದ್ದನ್ನು ಹೇಗೆ ಸದ್ವಿನಿಯೋಗಿಸ ಬೇಕೆಂಬುದು ವಿದ್ಯಾವಂತನಿಗೆ ತಾನೆ ಗೊತ್ತು. ತಲೆ ಕೆಟ್ಟವನಾದರೆ ನೋಟಿನ ಕಂತೆಯನ್ನು ಬೆಂಕಿಗೆ ಹಾಕಿ ಚಳಿ ಕಾಯಿಸಿಕೊಳ್ಳುತ್ತಾನೆ.


To know more about Astanga Yoga Vijnana Mandiram (AYVM) please visit our Official Website, Facebook and Twitter pages