Thursday, April 16, 2020

ಶ್ರೀರಂಗ ವಚನಾಮೃತ (Sriranga Vachanamruta) - 547

(ಮುಂದೆ ಹೋಗುತ್ತಿರುವ ಹುಳು ಒಂದರ ಮಾರ್ಗದಲ್ಲಿ ಒಂದು ಕಡ್ಡಿಹಾಕಿ), ಈ ಹುಳುವಿಗೆ ಮಧ್ಯೆ ಪ್ರತಿಬಂಧಕವಾಗಿ ಕಡ್ಡಿ ಬಂತು. ಆಗ ಅದು ಲಾಗ ಹಾಕಿ ಮುಂದಕ್ಕೆ ಹೊರಟೇ ಹೋಯಿತು. ಇದನ್ನು ಗಮನಿಸಿದಿರಾ? ಹಾಗೆಯೇ ಭಗವಂತನ ಒಂದು ಸೇವೆಯಲ್ಲಿ ಮಧ್ಯೆ ಮಧ್ಯೆ ತೊಡಕುಗಳು ಬಂದರೂ ಹೇಗೋ ಬಚಾಯಿಸಿ, ಉತ್ಸಾಹದಿಂದ ಮುಂದುವರೆಯಬೇಕು. ಹುಳುವು ತನ್ನ ಆಹಾರಕ್ಕೋ, ವಿಶ್ರಾಂತಿಗೋ, ಯಾವುದಕ್ಕೋ ಹೋಗುತ್ತಿದೆ. ಮಧ್ಯೆ ಬರುವ ಪ್ರತಿಬಂಧಕಗಳಿಂದ ಬಚಾಯಿಸಿಕೊಂಡು ಹೇಗೋ ಗುರಿಯನ್ನು ಸಾಧಿಸಿಬಿಡುತ್ತದೆ.


To know more about Astanga Yoga Vijnana Mandiram (AYVM) please visit our Official Website, Facebook and Twitter pages