Friday, April 17, 2020

ಶ್ರೀರಂಗ ವಚನಾಮೃತ (Sriranga Vachanamruta) - 548

ಮನುಷ್ಯನಲ್ಲಿ ಬೇರೆ ಬೇರೆ ಭಾವಗಳು ಕಾದುಕೊಂಡಿದ್ದು ಸಮಯ ಸಿಕ್ಕಿದಾಗ ನುಗ್ಗಿ ತಮ್ಮನ್ನು ಪ್ರಕಟಪಡಿಸಿಕೊಳ್ಳುವುವೋ ಅಂತೆಯೇ ಆತ್ಮನೂ ಸಹ ಅವಕಾಶ ಸಿಕ್ಕಿದಾಗ ನುಗ್ಗಿ ತನ್ನನ್ನು ಪ್ರಕಟಮಾಡಿಕೊಳ್ಳುತ್ತಾನೆ. ನೀವು ಭಗವದ್ಭಾವವನ್ನು ಪ್ರಕಟಿಸುವ ಈ ಸೇವಾ ಕಾರ್ಯವನ್ನು ಮಾಡಿ ಅಥವಾ ಬಿಡಿ, ಭಗವಂತನ ಸಂಕಲ್ಪವೊಂದು ಹೊರಟಮೇಲೆ ಅದು ಯಾರ ಮೂಲಕ ವಾದರೂ ತನ್ನ ಪ್ರಕಟಣೆಯನ್ನು ಮಾಡಿಸಿಕೊಳ್ಳುತ್ತೆ. ನೀವೇ ಮಾಡಿದರೆ ಅದು ನಿಮ್ಮ ಸುಕೃತ. ಭಗವಂತನ ಕಾರ್ಯಕ್ಕೆ ಸಾಧನವಾದ ಪುಣ್ಯ ನಿಮ್ಮದಾಗುತ್ತದೆ. ಅಹಂಕಾರ, ಆಲಸ್ಯಗಳಿಂದ ಅದಕ್ಕೆ ನಿಮ್ಮನ್ನು ಒಪ್ಪಿಸಿಕೊಳ್ಳದಿದ್ದರೆ ಬೇರೆ ಯಾವುದೋ ದ್ವಾರದಿಂದ ಅದು ಪ್ರಕಟವಾಗಿಯೇ ಆಗುತ್ತದೆ.


To know more about Astanga Yoga Vijnana Mandiram (AYVM) please visit our Official Website, Facebook and Twitter pages