Friday, April 3, 2020

ಶ್ರೀರಂಗ ವಚನಾಮೃತ (Sriranga Vachanamruta) - 534

ಒಳ್ಳೆಯ ವಿಷಯವನ್ನು ಆಪ್ತರೂ ಅಧಿಕಾರಿಗಳೂ ಆದವರಲ್ಲಿಡಿ. ಕಪಟ ಸ್ನೇಹಿತರಲ್ಲಿಡಬೇಡಿ. ಆದರೆ ಕಪಟ ಸ್ನೇಹಿತರಲ್ಲಿ ದಯೆ ತೋರಿಸಬೇಡವೇ? ಎಂದರೆ ಅವಶ್ಯವಾಗಿಯೂ ತೋರಿಸಬೇಕು. ಆಪ್ತರಲ್ಲಿಡುವುದಕ್ಕಿಂತಲೂ ಕಪಟಿಗಳಲ್ಲೇ ಹೆಚ್ಚು ದಯೆ ಇಡಬೇಕು. ಆದರೆ ಆ ದಯೆಯ ದುರುಪಯೋಗ ವಾಗಬಾರದು. ಕಪಟವೃತ್ತಿಯನ್ನೇ ಮಾಡಿ ಈ ಚೇತನವು ಅನ್ಯಾಯವಾಗಿ ಹಾಳಾಗುವುದಲ್ಲಾ! ಎಂದು, ದಯೆಯಿಂದ. ಆ ಕಪಟವನ್ನು ಹೋಗಲಾಡಿಸುವ ಬೇರೆ ಉಪಾಯಗಳನ್ನು ಹುಡುಕಿ ಹೇಗಾದರೂ ಅದನ್ನು ಹೋಗಲಾಡಿಸಿ ಆತನ ಕಪಟವನ್ನು ಕಳೆದು ಶುದ್ಧನಾದ ಅಧಿಕಾರಿ, ಪಾತ್ರ ಆದ ಮೇಲೆ ಅವನಲ್ಲಿ ವಿಷಯವನ್ನಿಡಿ.


To know more about Astanga Yoga Vijnana Mandiram (AYVM) please visit our Official Website, Facebook and Twitter pages