Monday, April 20, 2020

ಶ್ರೀರಂಗ ವಚನಾಮೃತ (Sriranga Vachanamruta) - 551

ಬಹುಶ್ರುತನಾಗಬೇಕು. ಹಾಗಾದರೆ ತಾನೇ ಬಹುವಿಧದಲ್ಲಿ ಲೋಕ ಸೇವೆಯನ್ನು ಮಾಡಬಹುದು. ಎಲ್ಲಾ ಭಾಷೆ, ಎಲ್ಲಾ ವಿದ್ಯೆ, ಎಲ್ಲಾ ಕಲೆ ಒಟ್ಟಿನಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಎಲ್ಲ ವಿಷಯಗಳನ್ನು ಸಂಗ್ರಹ ಮಾಡಬೇಕು. ಬುದ್ಧಿಯಲ್ಲಿ ಪ್ರತಿಯೊಂದು ವಿಷಯದ ಕೇಂದ್ರವೂ ತೆರೆಯಲ್ಪಟ್ಟಿರಬೇಕು. ಹೀಗೆ ಬಹುವಿಷಯಗಳನ್ನು ತಿಳಿದಿದ್ದರೇ ಅವುಗಳಲ್ಲಿ ಯಾವುದು ಉಪಾದೇಯ (ಸ್ವೀಕರಿಸಲು ಯೋಗ್ಯವಾದುದು)? ಯಾವುದು ಹೇಯ (ತ್ಯಜಿಸಲು ಯೋಗ್ಯವಾದುದು)? ಎಂದು ಆಯ್ಕೆ ಮಾಡಿ ಕಾರ್ಯ ಸಾಧಿಸಲು ಸಾಧ್ಯ.


To know more about Astanga Yoga Vijnana Mandiram (AYVM) please visit our Official Website, Facebook and Twitter pages