Thursday, April 2, 2020

ಶ್ರೀರಂಗ ವಚನಾಮೃತ (Sriranga Vachanamruta) - 533

ತೇರು ಮುಂದಕ್ಕೆ ಹೋಗಬೇಕಾಗಿರುವಾಗ ಅಮಾರ್ಗದಲ್ಲಿ ಹೋಗದಿರ ಬೇಕಾದರೆ ಗೊದಮ (ಚಲಿಸುತ್ತಿರುವ ರಥದ ವೇಗವನ್ನು ನಿಲ್ಲಿಸಿ ನಿಯಂತ್ರಿಸಲು ಬಳಸುವ ಮರದ ತುಂಡು ಮುಂತಾದ ಸಾಧನ) ಕೊಡಬೇಕು. ಆದರೆ ಆ ಗೊದಮದ ಜಾಗದಲ್ಲಿ ಬಾಳೆದಿಂಡನ್ನು ಹಾಕಬೇಡಿರಿ. ಹಾಗೆಯೇ ಮಿತಿಮೀರಿದ ಉತ್ಸಾಹದಲ್ಲಿ ಕೆಲಸ ಮರ್ಯಾದೆ ಮೀರಲು ಹೋದಾಗ, ಅದನ್ನು ತಡೆಯುವ ವಿವೇಕಿಗಳು ಬೇಕು, ಆ ತಡೆಯುವ ಕೆಲಸವನ್ನು ಅನಧಿಕಾರಿಗಳು ಮಾಡಬಾರದು.


To know more about Astanga Yoga Vijnana Mandiram (AYVM) please visit our Official Website, Facebook and Twitter pages