Thursday, April 23, 2020

ಶ್ರೀರಂಗ ವಚನಾಮೃತ (Sriranga Vachanamruta) - 554

ಭಗವಂತನ ಮನೋರಥವನ್ನು ಎಳೆಯಬೇಕಾದರೆ ಅವನನ್ನು ಅರಿತು ಕೊಂಡು ಎಳೆಯಬೇಕು, ಉದಾಹರಣೆಗೆ-ರಥೋತ್ಸವ. ಯಾವ ನೆಲೆಯಿಂದ ಮೊದಲು ಮಾಡಿದೆವೋ ಅಲ್ಲಿಯವರೆವಿಗೂ ಎಳೆದು ನಿಲ್ಲಿಸುವ ತನಕ ಉತ್ಸವವನ್ನು ಮಾಡಬೇಕಾಗುತ್ತದೆ. ಈ ದೇಹದ ರಥವನ್ನು ಒಬ್ಬರು ಈ ಕಡೆ, ಇನ್ನೊಬ್ಬರು ಆಕಡೆ ಹೀಗೆ ಹತ್ತು ಜನ ಎಳೆಯುತ್ತಿದ್ದಾರೆ. ಸ್ವಾಮಿ, ದೇವರೇ ಬಂದಿಲ್ಲ, ಎಳೆಯುತ್ತಿದ್ದೀರಲ್ಲಾ, ಎಂದು ಯಾರಾದರೂ ಎಚ್ಚರಿಸಿದಾಗ, 'ಓ ಹೌದಾ, ಕೂಡಿಸಿ, ಎಳೆಯೋಣ ಎನ್ನುವವರೂ ಒಂಟು.


To know more about Astanga Yoga Vijnana Mandiram (AYVM) please visit our Official Website, Facebook and Twitter pages