Saturday, April 18, 2020

ಶ್ರೀರಂಗ ವಚನಾಮೃತ (Sriranga Vachanamruta) - 549

ನಾವು ಭಗವಂತನ ಹೆಜ್ಜೆಯ ಗೆಜ್ಜೆಯಾಗಬೇಕು. ಹೆಜ್ಜೆಯ ಸದ್ದು ಗೆಜ್ಜೆಯಲ್ಲಿ ಬರುತ್ತದೆಯಪ್ಪಾ. ಗೆಜ್ಜೆ ಸುಮ್ಮನೆ ಸದ್ದು ಮಾಡುವುದಿಲ್ಲ. ಅದು ಜಡವಸ್ತು. ಅಂತೆಯೇ ಚೈತನ್ಯ ಸ್ವರೂಪಿಯಾದ ಭಗವಂತನ ಗತಿಗೆ ಅನುಗುಣವಾಗಿರ ಬೇಕು ನಮ್ಮ ಸೇವೆ. ಹೆಜ್ಜೆಗೆ ಗೆಜ್ಜೆ ಇದ್ದರೆ ಹೆಜ್ಜೆಯ ಸದ್ದನ್ನು ಗೆಜ್ಜೆ ಮಾಡುತ್ತದೆ. ಗೆಜ್ಜೆಯ ಧ್ವನಿ ಹೆಜ್ಜೆಯ ಧ್ವನಿಯೊಡನೆ ಸೇರಿಕೊಳ್ಳುತ್ತದೆ. ಹಾಗೆಯೇ ನಮ್ಮ ಸೇವೆ ಭಗವಂತನ ಆಶಯದೊಡನೆ ಒಂದಾಗಿ ಸೇರಿಕೊಳ್ಳಬೇಕು.


To know more about Astanga Yoga Vijnana Mandiram (AYVM) please visit our Official Website, Facebook and Twitter pages