Friday, April 10, 2020

ಶ್ರೀರಂಗ ವಚನಾಮೃತ (Sriranga Vachanamruta) - 541

ನೀವೆಲ್ಲರೂ ಏಕೆ ಒಂದೆಡೆ ಸೇರಬೇಕು ಎಂದರೆ ಭಗವಂತನ ಸೇವೆಗೋಸ್ಕರ. ಸೇವೆ ಎಂದರೆ ಪುರುಷನನ್ನು ಸ್ವಸ್ಥತೆಯಲ್ಲಿಟ್ಟು ರಕ್ಷಿಸುವ ಕೆಲಸ; ಬ್ರಹ್ಮನ ಸೃಷ್ಟಿಯಂತೆ ಪುರುಷನನ್ನು ಇಡುವ ಕೆಲಸ. ಬ್ರಹ್ಮನ ಸೃಷ್ಟಿಯು ಯಾವ ರೀತಿಯಾಯಿತೋ ಅದು ವಿಷಮರೀತಿಯನ್ನು ತಾಳದೇ ಇದ್ದರೆ ಅದೇ ಸ್ವಸ್ಥತೆ. 'ಸ್ವ ಎಂದರೆ ಆತ್ಮ. ಅದು ಸತ್ಯ-ಶಿವ-ಸುಂದರವಾದುದು. ಅದರ ನೆಲೆಯಲ್ಲಿ ನಿಲ್ಲಿಸುವುದು ಸ್ವಸ್ಥತೆ, ಅದು ಆತ್ಮನ ಪೂರ್ವರೂಪ. ಅದರ ರಕ್ಷಣೆಗಾಗಿಯೇ ನಿಮ್ಮ ಈ ಸಮೂಹದ ಓಡಾಟ. ಅದೇ ಸೇವೆ.


To know more about Astanga Yoga Vijnana Mandiram (AYVM) please visit our Official Website, Facebook and Twitter pages