Thursday, April 9, 2020

ಶ್ರೀರಂಗ ವಚನಾಮೃತ (Sriranga Vachanamruta) - 540

ಭಗವಂತನ ಮಹತ್ಪಾದವು ಬೆಳೆದು ಅದರ ಆಶಯವು ಬೆಳೆಯುವುದಕ್ಕನುಗುಣವಾಗಿ ನಡೆಯುವುದೇ ಸೇವೆ. ಹಾಗೆ ನಡೆದರೆ ಪೂರ್ವೋತ್ತರಗಳಿಗೆ ಅವಿರೊಧವಾಗಿ ಕ್ರಿಯೆ ಇರುತ್ತದೆ. ಬೀಜದ ಆಶಯದಂತೆ ಬೆಳೆದು ಬೀಜದಲ್ಲೇ ನಿಂತರೆ, ಮತ್ತೆ ಬೀಜವನ್ನು ನೆಟ್ಟರೆ ಧಾತಾ ಯಥಾ ಪೂರ್ವ ಮಕಲ್ಪಯತ್ ಎಂಬಂತೆ ಪುನಃ ಅದೇ ಸರಣಿಯೇ. [(ಪೂರ್ವೋತ್ತರ-ಹಿಂದಿನದು ಮತ್ತು ಮುಂದಿನದು) ಅಂದರೆ ಮೂಲಕ್ಕೆ ವಿರುದ್ಧವಾಗಿ, ಅನಂತರ ಕೃತಕವಾಗಿ ಬಂದು ಸೇರಿಕೊಂಡ ವಿಷಯಕ್ಕೆ ತಕ್ಕಂತೆ ಬೆಳೆಯಬಾರದು.] [ಮಹಾ ನಾರಾಯಣೀಯ ಸೃಷ್ಟಿ ಕರ್ತನಾದ ಭಗವಂತನು ಹಿಂದೆ ಹೇಗಿತ್ತೋ ಅದರಂತೆಯೇ ಸೃಷ್ಟಿಯನ್ನು ರಚಿಸಿದನು. ಎಂಬುದು ಈ ಶ್ರುತಿವಾಕ್ಯದ ಅರ್ಥ.]


To know more about Astanga Yoga Vijnana Mandiram (AYVM) please visit our Official Website, Facebook and Twitter pages