Tuesday, April 21, 2020

ಶ್ರೀರಂಗ ವಚನಾಮೃತ (Sriranga Vachanamruta) - 552

ಶಿಲ್ಪವೊಂದು ಸಿದ್ಧವಾಗಿ ಮುಂದೆ ನಿಂತರೆ, ಪ್ರತಿಷ್ಠೆ ಆದಮೇಲೆ ಮಂಗಳಾರತಿ ನೋಡಿ ಆನಂದಿಸುವುದರಲ್ಲಿ ಎಲ್ಲರಿಗೂ ಸಮಾನಾವಕಾಶ. ಆದರೆ ಶಿಲ್ಪ ಕೆತ್ತಲು ಎಲ್ಲರೂ ಬೇಕಾಗಿಲ್ಲ; ಸಾಧ್ಯವೂ ಇಲ್ಲ. ಹಲವೇ ಮಂದಿಯಾದರೂ ಶಿಲ್ಪಿಗಳ ಕೆಲಸ ಮಾತ್ರ ಅಲ್ಲಿ ಸಾಕು. ದೇವರ ಸೇವೆಯ ವಿಷಯದಲ್ಲೂ ಹೀಗೆಯೇ, ಸೇವೆ ಮಾಡಿದ ಆನಂದ ಎಲ್ಲರಿಗೂ ಒಂದೇ, ಆದರೆ ಸೇವೆ ಮಾಡುವ ವಿಧಾನ ಬೇರೆಯಾಗಿರಬಹುದು. ಪ್ರತಿಯೊಬ್ಬರೂ ತಮತಮಗೆ ಉಚಿತವಾದ ಕೆಲಸವನ್ನೇ ಮಾಡಬೇಕು.


To know more about Astanga Yoga Vijnana Mandiram (AYVM) please visit our Official Website, Facebook and Twitter pages