Saturday, July 25, 2020

ಶ್ರೀರಂಗ ವಚನಾಮೃತ (Sriranga Vachanamruta) - 647

ಶಿಲ್ಪದ ಭಾವ ಅದರ ಒಳರಚನೆ ಎಲ್ಲದರ ಅಯೋಜನೆಯನ್ನು ಅರಿತು, ಅದಕ್ಕನುಗುಣವಾಗಿ ಶಿಲ್ಪರಚನೆ ಮಾಡಬೇಕು. ಶಿಲ್ಪ ಹೊರರಚನೆ ಮಾತ್ರವಾದರೆ ಪ್ರಯೋಜನವಿಲ್ಲ. ಅದರಲ್ಲಿ ಒಳಭಾವವೂ ಸೇರಿರಬೇಕು. ಹಾಗೆ ಆ ಭಾವದೊಡನೆ ಇದ್ದಾಗ ಅದರಲ್ಲಿ ಪ್ರಾಣಪ್ರತಿಷ್ಠೆ ಮಾಡಬಹುದು. ಪೂರ್ಣವಾದ ಕಲೆಗಳಿಂದ ಕೂಡಿ ಆತ್ಮಪ್ರತಿಷ್ಠೆಯೂ ಆದರೆ ಅದು ಪೂರ್ಣಶಿಲ್ಪವಾಗುತ್ತದೆ. ಹೀಗೆ ಪೂರ್ಣಜ್ಞಾನವನ್ನು ಪಡೆದು ಅದನ್ನು ಪ್ರತಿನಿಧಿಸಲು ಅನುಗುಣವಾದ ಶಿಲ್ಪವೇ ಶಿಲ್ಪ. ಶಿಲ್ಪ ಮಾಡುವವರೆವಿಗೆ ಸಮಾಧಿಜ್ಞಾನದಲ್ಲಿರಬೇಕು. ಅದರ ಮನೋಧರ್ಮ ತಂದು ಮಾಡಬೇಕಾದರೆ ಅಂತೆಯೇ ಇರಬೇಕು. 
 


To know more about Astanga Yoga Vijnana Mandiram (AYVM) please visit our Official Website, Facebook and Twitter pages