Monday, July 6, 2020

ಶ್ರೀರಂಗ ವಚನಾಮೃತ (Sriranga Vachanamruta) - 628

ಅಸ್ಥಾನದಲ್ಲಿ ಸ್ನೇಹ ಕಾರುಣ್ಯಗಳುಂಟಾದರೆ ಜೀವನಕ್ಕೆ ಮಹಾ ಅಪಾಯ. ಕುರು ಎದ್ದರೆ, ದುರ್ಮಾಂಸ ಬೆಳೆದರೆ,ವೈದ್ಯ ಅದನ್ನು ಕತ್ತರಿಸಬೇಕೆ, ಬೇಡವೇ ? "ಅಯ್ಯೋ ! ದುರ್ಮಾಂಸವಾದರೆನು? ಬೆಳೆದರೆ ಬೆಳೆಯಲಿ" ಎಂಬ ಕರುಣೆ ವೈದ್ಯನಿಗೆ ಅದರಲ್ಲಿ ಹುಟ್ಟಿದರೆ ಕಷ್ಟ. ರೋಗಿ ಉಳಿಯಬೇಕೆ? ರೋಗ ಉಳಿಯಬೇಕೆ? ರೋಗಿಯ ಮೇಲೆ ಕರುಣೆಯಿದ್ದರೆ ರೋಗ ಅಳಿಯಲೇಬೇಕು. ರೋಗದ ಮೇಲೆಯೇ ಕರುಣೆಯಾದರೆ ರೋಗಿಯ ಜೀವಹಾನಿ. ಹೀಗಾದಲ್ಲಿ ವೈದ್ಯನಿಗೆ ಕೆಲಸವೇನು? 

 


To know more about Astanga Yoga Vijnana Mandiram (AYVM) please visit our Official Website, Facebook and Twitter pages