Saturday, September 26, 2020

ಶ್ರೀರಂಗ ವಚನಾಮೃತ (Sriranga Vachanamruta) - 710

ಒಬ್ಬ ವ್ಯಕ್ತಿಯನ್ನು ಅವನಿಗೆ ತಿಳಿಯದ, ಅವನು ಕಾಣದ ಕ್ಷೇತ್ರಕ್ಕೆ ಕೊಂಡೊಯ್ಯಬೇಕಾದರೆ ಅವನಿಗೆ ಈಗಾಗಲೇ ತಿಳಿದ ಕ್ಷೇತ್ರದಿಂದಲೇ ಪ್ರಯಾಣ ಆರಂಭವಾಗಬೇಕು. ಅವನು ಒಂಟಿಯಾಗಿ ಪ್ರಯಾಣ ಮಾಡಬೇಕಾಗಿದ್ದರೆ, ಅವನು ಈಗ ಇರುವ ಸ್ಥಳದಿಂದ ಅಥವಾ ಅವನು ತಲಪಬೇಕಾಗಿರು ಸ್ಥಳಕ್ಕೆ ಅತಿಹತ್ತಿರವಾಗಿದ್ದು, ಅವನಿಗೂ ತಿಳಿದಿರುವ ಸ್ಥಳದಿಂದ ಒಂದು ನಕಾಶೆಯನ್ನು ಬರೆದು, ಅದರ ವಿವರಣೆ ಸಹಿತ ಕೊಡಬೇಕು. ಇಂದ್ರಿಯಪ್ರಪಂಚವನ್ನು ಎಂದೂ ದಾಟಿಹೊಗದೇ ಇರುವ ವ್ಯಕ್ತಿಗಳಿಗೆ ಕೇವಲ ದಹರಾಕಾಶದಲ್ಲಿ ದರ್ಶನೀಯವಾದ ಪರಮಾತ್ಮನ ಬಳಿಗೆ ಸಾರಲು, ಮಾರ್ಗದರ್ಶನ ಮಾಡಲು, ಅವರು ಇರುವ ಇಂದ್ರಿಯ ಪ್ರಪಂಚದಿಂದಲೇ ಆರಂಭಿಸಬೇಕಾಗುತ್ತದೆ. ಈ ಉಪಕಾರ ಬುದ್ಧಿಯಿಂದಲೇ ಮಹರ್ಷಿಗಳು ತೀರ್ಥಕ್ಷೇತ್ರಗಳನ್ನು ಸೃಷ್ಟಿಸಿದರು. 
 


To know more about Astanga Yoga Vijnana Mandiram (AYVM) please visit our Official Website, Facebook and Twitter pages