Thursday, March 19, 2020

ಯುಗಾದಿಯ ಆಚರಣೆ (Ugadiya Aacharane) - 5





ಯುಗಾದಿಯ ಶಾಸ್ತ್ರ ಸಂಪ್ರದಾಯಗಳ ಗುರಿಯು ಪುರಷಾರ್ಥಗಳ ಸಿದ್ಧಿ. ಅಂದರೆ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ನಾಲ್ಕೂ ಫಲಗಳನ್ನು ಪಡೆಯುವುದೇ ಆಗಿದೆ.

ದೇಹ, ಇಂದ್ರಿಯ, ಮನಸ್ಸು, ಬುದ್ಧಿ ಎಲ್ಲದಕ್ಕೂ ಒಳ್ಳೆಯದನ್ನು ಮಾಡುವ ಪದಾರ್ಥಗಳನ್ನು ಅಂದು ಸೇವಿಸಬೇಕೆಂಬುದೇ ಇದರ ಉದ್ದೇಶ. ಯಾಂತ್ರಿಕವಾಗಿ ಸೇವನೆ ಮಾಡದೆ ಸಂಕಲ್ಪ ಸಹಿತವಾಗಿ, ಅಂತರಂಗದಲ್ಲಿರುವ ದೇವತೆಗಳ ಆರಾಧನೆಯೊಡನೆ ಸ್ವೀಕರಿಸಬೇಕೆಂದು ಋಷಿಗಳ ಆಶಯ.

ಅಭ್ಯಂಗ: ಪ್ರಾತ:ಕಾಲದಲ್ಲಿ "ಅಭ್ಯಂಗ" ಮಾಡಿಕೊಳ್ಳಬೇಕು. ಎಳ್ಳೆಣ್ಣೆಯಿಂದಲೇ ಅಭ್ಯಂಗ ಮಾಡಿಕೊಳ್ಳುವುದು ಪ್ರಶಸ್ತ. ಅಭ್ಯಂಗವನ್ನು ಪ್ರತಿದಿನವೂ ಆಚರಿಸಬೇಕು. ಅದು ಮುಪ್ಪು, ಆಯಾಸ, ವಾತದ ದೋಷಗಳನ್ನು ನಿವಾರಣೆ ಮಾಡುವುದು.

ದೃಷ್ಟಿಪಾಟವವನ್ನು ಕೂಡುವುದು. "ಪುಷ್ಟಿ" ಆಯಸ್ಸು, ನಿದ್ರೆಯ ಸೌಖ್ಯ ಇವುಗಳನ್ನುಂಟುಮಾಡುವುದು. ಚರ್ಮದ ಆರೋಗ್ಯ, ಸೌಂದರ್ಯ ಧೃಢತೆಗಳನ್ನು ತಂದುಕೊಡುವುದು ಎಂದು ಆಯುರ್ವೇದವು ಹೇಳುತ್ತದೆ. ಇದರಿಂದ ದೈಹಿಕ, ಮಾನಸಿಕ ಎರಡು ವಿಧವಾದ ಆರೋಗ್ಯವು ಕೂಡಿ ಬರುತ್ತದೆ. ಯುಗಾದಿ ದಿನದಂದು ಸಂಕಲ್ಪಪೂರ್ವಕವಾಗಿ ಈ ಆಭ್ಯಂಗವನ್ನು ಕೈಗೊಂಡರೆ, ನಿತ್ಯವೂ ಅಭ್ಯಂಗವನ್ನು ಆಚರಿಸುವಂತಾಗುತ್ತದೆ. ದೇಹವು ಹಗುರವಾಗುತ್ತದೆ. ಅಂದು ಅಚರಿಸಬಹುದಾದ ಆರೋಗ್ಯವ್ರತಕ್ಕೂ ಇದು ನಾಂದಿಯಾಗುತ್ತದೆ. ಭೌತಿಕ ಲಾಭಗಳೊಂದಿಗೆ ಭೋಗಪ್ರದವಾದ ಆಚರಣೆಯಾದರೂ ಯೋಗಕ್ಕೆ ಅನುಕೂಲಕರ ಈ ಅಭ್ಯಂಗ. ದೇಹ, ಇಂದ್ರಿಯ ಮನಸ್ಸನ್ನು ಹಗುರಗೊಳಿಸುತ್ತದೆ.

ನಾಳೆ ಮುಂದುವರೆಯುವುದು....
ಲೇಖಕರು: ಡಾII ಯಶಸ್ವಿನೀ


To know more about Astanga Yoga Vijnana Mandiram (AYVM) please visit our Official Website, Facebook and Twitter pages