Sunday, November 15, 2020

ಶ್ರೀರಂಗ ವಚನಾಮೃತ (Sriranga Vachanamruta) - 760

ಕೃಷ್ಣನ ಕೈಗೆ ಕೊಳಲು ಸಿಕ್ಕಿದಾಗ ಅವನು ಅದರಲ್ಲಿ ತನ್ನ ಉಸಿರಾಡಿಸಿದ. ಅವನದೇ ಆದ ಜ್ಞಾನ ಅವನ ಇಚ್ಛೆಯಂತೆ ಅದರಲ್ಲಿ ಹೊರಹೊಮ್ಮುವುದು. ಆದರೆ ಅದೇ ಕೊಳಲು ಬೇರೆಯವರಿಗೆ ಸಿಕ್ಕಿದಾಗ, ಕೃಷ್ಣನ ಜ್ಞಾನವಿಲ್ಲದಿದ್ದಾಗ, ಉಸಿರಾಡುವ ಕ್ರಿಯೆ ನಡೆದರೂ ಹೊರಹೊಮ್ಮುವ ವಿಷಯಬೇರೆ. ನಾದಮೂಲನಾದ ಕೃಷ್ಣನ ಕೊಳಲಿನಲ್ಲಿ ಪೂರ್ಣನಾದವು ಹೊರಹೊಮ್ಮಿದರೆ, ನಾದಮರ್ಮವರಿಯದ ಇತರರ ಕೈಯ್ಯಲ್ಲಿ ಅದು ಹೊರಹೊಮ್ಮಲಾರದು. ಹೊರಗಿನ ಕ್ರಿಯೆಗಳು ಒಂದೇ ರೀತಿ ತೋರಿದರೂ ಅದು ಅನುಕರಣವಾಗದೇ ಅಪಕರಣವಾಗಿ ಬೇರೆ ವಿಷಯ ತುಂಬಿಕೊಳ್ಳುತ್ತೆ. ಹೀಗೆ ಜ್ಞಾನಿಗಳು ತಂದ ದೇವಾಲಯಗಳಲ್ಲಿ ಅವರ ಜ್ಞಾನ ಸಿಗದೇ ಬೇರೆ ವಿಷಯ ಆಕ್ರಮಿಸಿಕೊಂಡಿದೆ. ಅರಿಷಡ್ವರ್ಗಗಳು ಆಕ್ರಮಿಸಿಕೊಂಡಿವೆ. 
 


To know more about Astanga Yoga Vijnana Mandiram (AYVM) please visit our Official Website, Facebook and Twitter pages