Friday, November 13, 2020

ಶ್ರೀರಂಗ ವಚನಾಮೃತ (Sriranga Vachanamruta) - 752

ಅಧ್ಯಾತ್ಮಯೋಗದಲ್ಲಿರುವ ಒಂದು ವಿಷಯವು ಆ ಸಂಸ್ಕಾರವಿದ್ದವನಿಗೆ ತನ್ನ ವ್ಯಾಖ್ಯಾನವನ್ನು ಕೊಟ್ಟು ಕೊಳ್ಳುತ್ತದೆ. ಮೌನವಾಗಿಯೇ ಇದ್ದರೂ ಹೃದಯದಲ್ಲಿ ಏನೋ ಬಂದು ತಟ್ಟುತ್ತೆ. ಅವನ ಪ್ರಸನ್ನತೆಯೇ, ಉನ್ನತಸ್ಥಿತಿಯೇ, ಒಂದು ಪ್ರತಿಕ್ರಿಯೆ ಮಾಡುತ್ತದೆ. ಅಂತೆಯೇ ಆ ಬಗ್ಗೆ ಮಾತಾಡದಿದ್ದರೂ ತಟ್ಟುತ್ತದೆ. ಅಂತೆಯೇ ಕಲ್ಲಿಗೆ ಋಷಿ ಹೃದಯ ಕೊಟ್ಟರೆ ಅಲ್ಲಿ ಏನನ್ನು ಹೇಗೆ ನೋಡಬಹುದು? ಅಭಿಜ್ಞಾನನಾದವನು ನೋಡಿದರೆ ಆ ಶಿಲೆಯ ಮೌನವೇ ಆ ಶಿಲೆಯ ವ್ಯಾಖ್ಯಾನವನ್ನು ಕೋಡುತ್ತದೆ. ಆ ಅಭಿಜ್ಞಾನ ರೂಪವಾದ ಕಲ್ಲಿನ ಮೇಲೆ ಲೈಫ್ (Life) ಹರಿಸಿದೆ.  


To know more about Astanga Yoga Vijnana Mandiram (AYVM) please visit our Official Website, Facebook and Twitter pages