Friday, November 13, 2020

ಶ್ರೀರಂಗ ವಚನಾಮೃತ (Sriranga Vachanamruta) - 758

ಜ್ಞಾನಿಗಳು ದೈವೀಸಂಪತ್ತನ್ನು ಕಷ್ಟಪಟ್ಟು ಸಂಪಾದಿಸಿದರು. ಆದರೆ ಮುಂದಿನವರು ಅದರಿಂದ ತಾವೂ ಲಾಭಪಡೆಯಲಿಲ್ಲ, ತಮ್ಮ ಮಕ್ಕಳಿಗೂ ಕೊಡಲಿಲ್ಲ, ಹಾಗಾಯಿತು. ಇವರಿವರ ಕಚ್ಚಾಟಕ್ಕೆ ಎಡೆಯಾಯಿತು. ನಿರ್ವೇದಕ್ಕೆ ಜಾಗವಾಯಿತು. ಆದ್ದರಿಂದ ಇನ್ನಾದರೂ ಎಚ್ಚರಗೊಳ್ಳಬೇಕು. ಸರಿಯಾದ ವಿಷಯ ನೋಡಿ ಸಕಾಲದಲ್ಲಿ ಬೆಳೆಸಬೇಕು. ಗುಡಿಗೋಪುರಗಳಲ್ಲಿರುವ ಜೀವವನ್ನರಿತು, ನಮ್ಮ ಜೀವನದಲ್ಲಿ ಶಾಂತಿಧಾಮವನ್ನು ಕಾಣುವಂತಾಗಬೇಕು. ಶಿವ-ಮಂಗಳವಾದ ಬಾಳಾಟವನ್ನು ಪಡೆದರೆ ಇವೆಲ್ಲಾ ಸಾರ್ಥಕ.  


To know more about Astanga Yoga Vijnana Mandiram (AYVM) please visit our Official Website, Facebook and Twitter pages