Friday, November 13, 2020

ಶ್ರೀರಂಗ ವಚನಾಮೃತ (Sriranga Vachanamruta) - 751

'ಎಳನೀರು ತೆಗೆದುಕೋಳ್ಳಿ' ಎಂದು ಮಟ್ಟೆಯೊಡನೆ ಕೊಟ್ಟರೆ, ಅದರ ಮಟ್ಟೆ ನಾರುಗಳನ್ನು ಕಚ್ಚಿ 'ಇಲ್ಲೆಲ್ಲಿದೆ ಎಳನೀರು?' ಎಂದು ದೂರುವಂತಾಗ ಬಾರದು. ಎಳನೀರು ಎಂದರೆ ಎಳನೀರನ್ನೇ ನೇರವಾಗಿ ಕೊಡಲಾಗುವುದಿಲ್ಲ. ಅದನ್ನು ಧರಿಸಲು ಪಾತ್ರೆಬೇಕು. ಆ ಪಾತ್ರೆಯೊಡನೆ ಕೊಟ್ಟಾಗ, ಪಾತ್ರೆ ಅಗಿದರೆ ಅವಿವೇಕ ಅಷ್ಟೆ. ಅದನ್ನು ಮಾನವ ನಿರ್ಮಿತವಾದ ಪಾತ್ರೆಯಲ್ಲಿಯೂ ಕೊಡಬಹುದು. ಆದರೆ ಆ ನೀರನ್ನಿಡಲು ಭಗವಂತ ಅದರ ಜೊತೆಗೆ ಪಾತ್ರೆಯನ್ನು ನಿರ್ಮಿಸಿ ಕೊಟ್ಟಿದ್ದಾನೆ. ತೀರ್ಥಕ್ಷೇತ್ರಗಳೇ ಆ ಪಾತ್ರೆ. ಪಾತ್ರೆ ಕಚ್ಚಿ ಅಲ್ಲೇನಿದೆ ಎಂದು ಟೀಕಾಟೋಕೆ ಮಾಡಬಾರದು. ಅದರೋಳಗಿನ ಸಾರವನ್ನು ನೋಡದೆ, ನಮ್ಮ ಜೀವನದ ತಾಪವಡಗಿಸುವ ಅಮೃತವನ್ನೇನು ತುಂಬಿಕೋಟ್ಟಿದ್ದಾರೆ ಎಂಬುದನ್ನು ಗಮನಿಸದೇ ಇದ್ದಾಗ, ಅದನ್ನು ನೋಡಿ ಟೀಕಾ-ಟೋಕೆ ಮಾಡುವವರೂ ಉಂಟು.
 



To know more about Astanga Yoga Vijnana Mandiram (AYVM) please visit our Official Website, Facebook and Twitter pages