Tuesday, October 20, 2020

ಶ್ರೀರಂಗ ವಚನಾಮೃತ (Sriranga Vachanamruta) - 734

ಒಂದು ದೊಡ್ಡ ದೇವಾಲಯದ ಮುಂದೆಹೋಗಿ 'ದೇವರುಂಟು' ಎಂದರೆ, ಪ್ರತಿಧ್ವನಿ ಹಾಗೆಯೇ ಬರುತ್ತದೆ. "ದೇವರಿಲ್ಲ" ಎಂದರೆ ಹಾಗೆಯೇ ಪ್ರತಿಧ್ವನಿಸುತ್ತದೆ. 'ದೇವರು ಪ್ರಕಾಶ-ಆನಂದಗಳಿಂದಕೂಡಿದ್ದಾನೆ' ಎಂದರೆ ಹಾಗೆಯೇ ಪ್ರತಿಧ್ವನಿಸುತ್ತದೆ. ಹೀಗೆ ಗುಡಿಯಮುಂದೆ ಬೊಬ್ಬೆ ಹಾಕಿದರೆ ಪ್ರತಿಧ್ವನಿಯೂ ಬೊಬ್ಬೆಯೇ ಆಗಿದೆ. ಗುಡಿಗಳಿಗೆ ಹೋಗಿ ಬೊಬ್ಬೆಹಾಕಿ, ನಿಮ್ಮ ಬೊಬ್ಬೆಯನ್ನೇ ಮತ್ತೆ ಕೇಳಿ ಬರುತ್ತಿದ್ದೀರಿ. ಈ ಬೊಬ್ಬೆಯಲ್ಲಿ ಗುಡಿಯಕಡೆಯಿಂದ ಬರುವ ನಾದ ಮರೆತು ಹೋಗಿದೆ. ಗುಡಿಯದೇ ಆದ ನಾದವೇನು? ಅದನ್ನು ಕೇಳಿ. ನಿಮ್ಮ ಕೂಗನ್ನು ಕೇಳಲು ಅಲ್ಲಿ ಹೋಗಬೇಡಿ. 

 


To know more about Astanga Yoga Vijnana Mandiram (AYVM) please visit our Official Website, Facebook and Twitter pages