Wednesday, October 14, 2020

ಶ್ರೀರಂಗ ವಚನಾಮೃತ (Sriranga Vachanamruta) - 728

ಮನಷ್ಯನ ಕಾಮಕ್ರೋಧಾದಿಗಳಿಗೆ ಲೌಕಿಕಜೀವನದಲ್ಲಿ ಬೇಕಾದಷ್ಟು ಅವಕಾಶದೊರೆಯುತ್ತದೆ. ಆದರೆ ಶಾಂತಿ, ಸಂಯಮ, ಭಕ್ತಿ ಇವುಗಳಿಗೆ ಅವಕಾಶವೆಲ್ಲಿ? ಅವುಗಳಿಗೂ ಅವಕಾಶ ದೊರೆಯುವಸಲುವಾಗಿ ಒಂದು ದೇವಮಂದಿರ-ಒಬ್ಬ ದೇವರು ಬೇಕು. ಶಾಂತಿ, ಸಂಯಮ, ಭಕ್ತಿ ಇವುಗಳಿಗೆ ಚೆನ್ನಾಗಿ ಅವಕಾಶಕೊಟ್ಟು ಬೆಳೆಸಿಕೊಂಡರೆ ಅದರಫಲವಾಗಿಯೇ ಭಗವಂತನು ಲಭಿಸುತ್ತಾನೆ. ಆ ಫಲದಬಗ್ಗೆ ನಮಗೆ ಆಸೆಯಾಗಲೀ, ಕಲ್ಪನೆಯಾಗಲಿ, ಸ್ವಾಭಾವಿಕವಾಗಿ ಮೊದಲು ಉಂಟಾಗದೇಹೋದರೂ ಅದನ್ನು ನಮಗೆ ಉಂಟುಮಾಡುವಸಲುವಾಗಿಯೇ ಮಹರ್ಷಿಗಳು ನಮ್ಮ ಸಂಪ್ರದಾಯದಲ್ಲಿ ದೇವಸ್ಥಾನಕ್ಕೆ ಹೋಗಿ ದೇವರದರ್ಶನವನ್ನು ಮಾಡಿ ಬರುವುದು, ತೀರ್ಥಕ್ಷೇತ್ರಗಳಿಗೆ ಯಾತ್ರೆಮಾಡುವುದು, ಎಂಬುದನ್ನು ಬೆಳೆಸಿದ್ದಾರೆ. 

 


To know more about Astanga Yoga Vijnana Mandiram (AYVM) please visit our Official Website, Facebook and Twitter pages