Thursday, August 6, 2020

ಶ್ರೀರಂಗ ವಚನಾಮೃತ (Sriranga Vachanamruta) - 659

ಮಗುವೇನಾದರೂ "ಚರ್ಮದ ಚೀಲದಿಂದ ಹಾಲು ಕುಡಿಯುವುದೇ?" ಎಂದು ಸ್ತನ್ಯಪಾನ ಮಾಡದೆ ಸುಮ್ಮನಾದರೆ ಅದಕ್ಕೇ ಹೊಟ್ಟೆಗಿಲ್ಲ. ಪ್ರೀತಿಯಿಂದ ಹಂಬಲಿಸಿ ತಾಯಿಯ ಮಡಿಲಲ್ಲಿ ಮಲಗಿ ಸ್ತನ್ಯವನ್ನು ಕುಡಿದರೆ ದೇಹದ ಬೆಳವಣಿಗೆ ಆಗುತ್ತದೆ. ಹಾಗೆಯೇ ಜ್ಞಾನಿಗಳು ಕೊಟ್ಟ ಜ್ಞಾನಸ್ತನ್ಯವನ್ನು ಪಡೆಯಬೇಕಾಗಿರುವಾಗ ಇದು ಕಲ್ಲು, ಇದು ವಿಗ್ರಹ ಎಂದು ಬಿಟ್ಟುಬಿಟ್ಟರೆ ಬಿಟ್ಟವರಿಗೇ ನಷ್ಟ. ಇಲ್ಲದೇ ಹಂಬಲಿಸಿ ಅವರ. ಜ್ಞಾನಸ್ತನ್ಯಕ್ಕಾಗಿ ಆಸೆಪಟ್ಟು ಕುಡಿದರೆ ಆತ್ಮದ ಬೆಳವಣಿಗೆ ಆಗುವುದು. 
 


To know more about Astanga Yoga Vijnana Mandiram (AYVM) please visit our Official Website, Facebook and Twitter pages