Thursday, March 23, 2023

ಶ್ರೀರಂಗ ವಚನಾಮೃತ (Sriranga Vachanamruta)

ಬಂಡಿ, ಬಸ್ಸು, ವಿಮಾನ, ರಾಕೆಟ್ ಇವುಗಳೆಲ್ಲವೂ ಪ್ರಯಾಣದ ಸಾಧನಗಳು. ಸ್ವಲ್ಪ ದೂರ ಸಾಗಲು ಬಂಡಿ ಸಾಕು. ಅದಕ್ಕೆ ವೆಚ್ಚವೂ ಅಲ್ಪ. ಆದರೆ ಹದಿನೇಳು ಸಾರಿ ಭೂಪ್ರದಕ್ಷಿಣೆ ಮಾಡಬೇಕಾದರೆ ರಾಕೆಟ್ ಬೇಕಾಗುವುದು. ನಾವು ಮಾಡಬೇಕಾದ ಪ್ರಯಾಣಕ್ಕೆ ತಕ್ಕ ಯಾನ ಬೇಕಾಗುವುದು. ಅಂತೆಯೇ ಕೇವಲ ಇಂದ್ರಿಯಜೀವನವನ್ನು ಅಷ್ಟೇ ಮಾಡುವುದಾದರೆ ಅದಕ್ಕೆ ಯಾವ ತಪಸ್ಯೆಯ ಅಗತ್ಯವೂ ಇಲ್ಲ. ಭುವಿ, ದಿವಿಯಲ್ಲಿ ಅಪ್ರತಿಹತವಾದ ನಡೆಯುಳ್ಳವನಾಗ ಬೇಕಾದರೆ, ಪೂರ್ಣಾತ್ಮನಾಗಿ ಬಾಳಬೇಕಾದರೆ, ಅಲ್ಲಿ ತಪಸ್ಯೆ ಬೇಕಾಗುತ್ತೆ.



To know more about Astanga Yoga Vijnana Mandiram (AYVM) please visit our Official Website, Facebook and Twitter pages