Friday, December 4, 2020

ಶ್ರೀರಂಗ ವಚನಾಮೃತ (Sriranga Vachanamruta) - 779

ಭಗವಂತನು ಭೂರ್ಭುವಸ್ಸುವರ್ಲೋಕಗಳನ್ನು ಅಳೆದು 'ತ್ರೇಧಾ ನಿದಧೇಪದಂ' ಎಂಬಂತೆ ತನ್ನ ಪಾದವಿನ್ಯಾಸ ಮಾಡಿದನೆಂದು ಶ್ರುತಿಯಲ್ಲೋ, ಸ್ಮೃತಿಯಲ್ಲೋ ಹಾಡಿದಪಕ್ಷದಲ್ಲಿ, ಅವನ ತಾದಾತ್ಮ್ಯ ಅನುಭವಿಸಬೇಕಾದರೆ ಅದಕ್ಕೆ ದರ್ಶನವೇ ಬೇಕು. ಇಲ್ಲದೆ ಕೇವಲ ಹೊರನೋಟದಲ್ಲಿ ಶಿಲೆಯನ್ನು ಹೇಳುವುದಾದರೆ, ನಮ್ಮ ಕಣ್ಣೆದುರಿಗೆ ಕಾಣುವಷ್ಟು ಎತ್ತರದಲ್ಲಿರುವ ಶಿಲೆ ಮೂರು ಲೋಕಗಳನ್ನೂ ವ್ಯಾಪಿಸಿನಿಂತಿದೆ ಎಂದರೆ ಹಾಸ್ಯಾಸ್ಪದವಾಗುತ್ತೆ. 
 


To know more about Astanga Yoga Vijnana Mandiram (AYVM) please visit our Official Website, Facebook and Twitter pages