Thursday, December 3, 2020

ಶ್ರೀರಂಗ ವಚನಾಮೃತ (Sriranga Vachanamruta) - 778

ಈಗಿನ ಕಾಲದಲ್ಲಿ ಮನುಷ್ಯನು ಭೂಮಿಯ ಮೇಲೆ ವೇಗವಾಗಿ ಸಂಚರಿಸುತ್ತಾನೆ. ಆಕಾಶದಲ್ಲಿ ವಿಮಾನಗಳಿಂದ ಸಂಚಾರ ಮಾಡುತ್ತಿದ್ದಾನೆ. ಚಂದ್ರಲೋಕಕ್ಕೆ ಕೂಡಾ ಹೋಗುವ ಉತ್ಸಾಹ ತೋರಿಸುತ್ತಿದ್ದಾನೆ. ಈಗಿನ ಜನಗಳ ಮನಸ್ಸು ಹೀಗೆ ಓಡುತ್ತಿದೆ. ಹಿಂದೆ ಮಹರ್ಷಿಗಳ ಕಾಲದಲ್ಲಿ ದೇವಾಲಯಕ್ಕೂ, ಆತ್ಮಲೋಕಕ್ಕೂ ಹೋಗಿ ಅಲ್ಲಿನ ಸ್ಥಿತಿಗತಿಗಳನ್ನು ತಿಳಿದುಕೊಂಡು ಬರಬೇಕೆಂಬ ಆಸೆಯುಳ್ಳ ಜನರಿದ್ದರು. ತೀರ್ಥಕ್ಷೇತ್ರಗಳು ಮತ್ತು ದೇವಾಲಯಗಳೇ ಮಹರ್ಷಿಗಳು ದೇವಲೋಕ, ಆತ್ಮಲೋಕಗಳಿಗೆ ಹೋಗಲು ಇಚ್ಛೆಯುಳ್ಳವರಾಗಿ ತಯಾರು ಮಾಡಿಟ್ಟ ಯಾನಗಳೂ ನಕಾಶೆಗಳೂ ಆಗಿವೆ. ಅವರ ಮನಸ್ಸನ್ನು ಅರಿತವರು ಇದ್ದರೆ ತಾನೇ, ಅವುಗಳನ್ನು ಹೇಗೆ ಬಳಸಿಕೊಂಡು ಪ್ರಯೋಜನ ಪಡೆಯಬಹುದು ಎಂದು ಗೊತ್ತಾಗುತ್ತದೆ. 
 


To know more about Astanga Yoga Vijnana Mandiram (AYVM) please visit our Official Website, Facebook and Twitter pages