Wednesday, December 2, 2020

ಶ್ರೀರಂಗ ವಚನಾಮೃತ (Sriranga Vachanamruta) - 777

ಜ್ಞಾನಿಗಳು ಬಹಳ ಕರುಣೆಯಿಂದ ತುಂಬಿದವರಾಗಿ ತಮ್ಮ ಸುಖಕ್ಕೆ ಕಾರಣವಾದ ತಪಸ್ಯೆಯನ್ನು ಕಲ್ಲಿನ ಮೇಲಿಟ್ಟರು. ಸಾಹಿತ್ಯದ ಮೇಲೂ ಇಟ್ಟರು. ತಮ್ಮ ಮನೋಧರ್ಮವನ್ನು ವೀಣೆಯೇ ಮುಂತಾದ ವಾದ್ಯಗಳ ಮೇಲೂ ಇಟ್ಟರು. ಶಿಲ್ಪದ ಮೇಲೂ ಇಟ್ಟರು. ಅವರು ವೀಣೆಯಲ್ಲಿ ಶ್ರುತಿ ಮಾಡಿಟ್ಟಿದ್ದರು. ಯಾರೋ ಮಧ್ಯೆ ಶ್ರುತಿ ತಿರುಗುಸಿಬಿಟ್ಟಿದ್ದಾರೆ. ಆ ದಿವ್ಯವಾದ ಸದ್ದುಬರುತ್ತಿಲ್ಲ. ಯಾವನ ಒಂದು ಆತ್ಮಧರ್ಮವನ್ನು ಯಾವ ಪ್ರಕೃತಿಯ ಮೇಲೆ ಜ್ಞಾನಿಗಳು ಪ್ರತಿಷ್ಠೆಮಾಡಿದರೋ, ಅದರ ವ್ಯಾಖ್ಯಾನ ಅದಕ್ಕನುಗುಣವಾಗಿಲ್ಲದಿದ್ದರೆ ಅದಕ್ಕೆ ಬೆಲೆಯಿಲ್ಲ.  


To know more about Astanga Yoga Vijnana Mandiram (AYVM) please visit our Official Website, Facebook and Twitter pages