Thursday, July 28, 2022

ಶ್ರೀರಂಗ ವಚನಾಮೃತ (Sriranga Vachanamruta)

ಭಗವಂತ - ಭಗವತಿಯಿಂದ ಜೀವದ ಕಡೆಗೆ ಏನು ಹರಿದು ಬರುತ್ತದೆಯೋ ಅದನ್ನರಿತು ತರುವವನೇ ತಂದೆ. ತಂದೆ, ಏನು ತಂದೆ? ಎಂದರೆ ಜ್ಞಾನವನ್ನು ತಂದೆ ಎನ್ನುವವನೇ ತಂದೆ. ಅವನ ಜ್ಞಾನವು ತಾನಾಗಿಯೇ ಬೆಳೆದು ವಿಸ್ತಾರಗೊಳ್ಳಲು ಬಯಸಿದಾಗ ಅದನ್ನು ಹೊತ್ತು ಬೆಳೆಸುವವಳೇ ತಾಯಿ. ಅವರು ಬೆಳೆಸಿಕೊಂಡು ಬಂದದ್ದನ್ನು ಅರಿತು ಅಂತೆಯೇ ಜ್ಞಾನ ರೂಪದಲ್ಲಿಯೇ ನಿಲ್ಲಿಸುವವನೇ ಗುರು. ಜೀವನದ ಒಂದೊಂದು ಘಟ್ಟದಲ್ಲಿ ಒಂದೊಂದು ರೀತಿ ಕೆಲಸ ಸಾಗಬೇಕಾಗಿದೆ.




To know more about Astanga Yoga Vijnana Mandiram (AYVM) please visit our Official Website, Facebook and Twitter pages