Tuesday, January 17, 2023

ಶ್ರೀರಂಗ ವಚನಾಮೃತ (Sriranga Vachanamruta)

ಆರ್ಯಭಾರತ ಮಹರ್ಷಿಗಳು ಇಂದ್ರಿಯಗಳನ್ನು ಹಳಿಯಲಿಲ್ಲ. ಅವುಗಳ  ಸೆರೆಗೆ ಸಿಕ್ಕಿಕೊಳ್ಳಲೂ ಇಲ್ಲ. ಅಷ್ಟೇ ಅಲ್ಲದೆ ಇಂದ್ರಿಯಗಳೆಲ್ಲವೂ ಭಗವಂತನು ದಯಪಾಲಿಸಿದ ಒಂದು ಐಶ್ವರ್ಯವೆಂದೇ ಭಾವಿಸುತ್ತಿದ್ದರು. ಐಶ್ವರ್ಯವನ್ನು ಹೊತ್ತುಕೊಂಡು ನಾವು ಅವನಿಂದ ಬಹಳ ದೂರ ಬಂದಿದ್ದೇವೆ. ಪುನಃ ಐಶ್ವರ್ಯವನ್ನು ಬಳಸಿಕೊಂಡೇ ಅವನ ಬಳಿಗೆ ಹೋಗಬೇಕು - ಎಂಬ ನ್ಯಾಯವನ್ನು ಕಂಡುಕೊಂಡರು. ಇದನ್ನೇ ತಮ್ಮ  ಜನಾಂಗವು ಅರಿಯಲೆಂದು ಇಡೀ ನಾಡನ್ನೇ, ತಮ್ಮ ಮನೋಧರ್ಮವನ್ನು ಇಡಲು ಒಂದು ದೊಡ್ಡ ಸಾಧನವನ್ನಾಗಿ ಮಾಡಿಕೊಂಡರು.



To know more about Astanga Yoga Vijnana Mandiram (AYVM) please visit our Official Website, Facebook and Twitter pages