Tuesday, October 4, 2022

ಶ್ರೀರಂಗ ವಚನಾಮೃತ (Sriranga Vachanamruta)

ಜೀವನಕ್ಕನುಗುಣವಾದ ಸಂಸ್ಕೃತಿ ಬೆಳೆಸಿಕೊಳ್ಳಿ. ಬೇರಿನಿಂದ ಎಲ್ಲಕ್ಕೂ ರಸ ಹರಿದೇ ಗಿಡ ಬೆಳೆಯುತ್ತಿದೆ. ಬೇರನ್ನು ಮುಟ್ಟಿಯೇ ಗಿಡದ ರಸ ಎಲ್ಲೆಡೆಗೂ ಹರಿಯುತ್ತದೆ. ಆತ್ಮವನ್ನು ಮುಟ್ಟಿಯೇ ನಮ್ಮ ಬಾಳಾಟ ಸಾಗಬೇಕಾಗಿದೆ. ರಸವನ್ನು ತುಂಬಿ ಹರಿಸಿದರೇ ಭೌತಿಕ-ದೈವಿಕ-ಆಧ್ಯಾತ್ಮಿಕ ಕ್ಷೇತ್ರಗಳ ಬೆಳವಣಿಗೆ ಚೆನ್ನಾಗಿ ಆಗಿರುವುದು. ಅಂತಹ ಮೂರು ಕ್ಷೇತ್ರಗಳಿಂದೊಡಗೂಡಿದ ಜೀವನ ನಮ್ಮದು ಎಂದು ಜೀವನದ ಬಗ್ಗೆ ತೀರಮಾನಕ್ಕೆ ಬಂದ ಬಳಿಕ ಅದಕ್ಕನುಗುಣವಾದ ಸಂಸ್ಕೃತಿಯನ್ನು ನಾವು ಬೆಳೆಸಿಕೊಳ್ಳಬೇಕು.



To know more about Astanga Yoga Vijnana Mandiram (AYVM) please visit our Official Website, Facebook and Twitter pages