Tuesday, August 2, 2022

ಶ್ರೀರಂಗ ವಚನಾಮೃತ (Sriranga Vachanamruta)

ತಾಯಂದಿರ ಜವಾಬ್ದಾರಿ ಎಲ್ಲಿಯವರೆಗೆ ಇದೆ-ಎಂಬುದನ್ನು ತಿಳಿಯಬೇಕು. ಮಗುವಿನ ದೇಹವನ್ನು ಬೆಳೆಯಿಸಿಬಿಟ್ಟರೆ ಸಾಲದು. ಮಗುವು ದೀಪವನ್ನು ನೋಡಿ ನಲಿಯುತ್ತದೆ. ತಾಯಿಯು ಅದರ ಮುಂದೆ ಅದು ಹಿಂದೆ ಕಂಡಿದ್ದ ಬೆಳಕನ್ನು ಮರೆಯದಂತೆ ಒಂದು ದೀಪವನ್ನು ಹಚ್ಚಿ ಬೆಳಕಿನೊಡನೆ ಬೆಳೆಯಿಸಿ ತಂದೆಯ ವಶಕ್ಕೆ ಕೊಟ್ಟು ಅವನು ಮತ್ತೊಂದು ಜವಾಬ್ದಾರಿಯಿಂದ ಬೆಳಕು ಆರದಂತೆ ಆಚಾರ್ಯನ ಸನ್ನಿಧಿಗೆ ಕರೆದುಕೊಂಡು ಹೋಗಿಬಿಟ್ಟು ಅಲ್ಲಿಂದ ಮುಂದೆ ಆಚಾರ್ಯನೂ ಬೆಳಕಿನ ಪ್ರಕಾಶದಲ್ಲಿ ಅದು ಎಲ್ಲವನ್ನೂ ಕಂಡು ಬಾಳುವಂತೆ ಒಂದು ದೃಷ್ಟಿಯನ್ನು ಕೊಟ್ಟು ಪರಮಪುರುಷನ ಮಡಿಲಿನಲ್ಲಿ ಬಿಡುವಂತಾಗಬೇಕು. ಅಲ್ಲಿಯವರೆಗೂ ಅನುಸ್ಯೂತವಾಗಿ ಮುಂದುವರೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ತಾಯಂದಿರದಾಗಿದೆ. ಆದ್ದರಿಂದಲೇ ಮಾತೃದೇವೋ ಭವ ಪಿತೃದೇವೋ ಭವ ಆಚಾರ್ಯ ದೇವೋ ಭವ ಎಂದು ಕ್ರಮವನ್ನು ವೇದವಾಣಿಯೇ ತಿಳಿಸುತ್ತದೆ.



To know more about Astanga Yoga Vijnana Mandiram (AYVM) please visit our Official Website, Facebook and Twitter pages