Tuesday, June 20, 2023

ಶ್ರೀರಂಗ ವಚನಾಮೃತ (Sriranga Vachanamruta)

ಬುದ್ಧಿ ಚೆನ್ನಾಗಿರುವಾಗ ಒಂದು ರೀತಿ ಕೆಲಸ ಮಾಡುತ್ತಾನೆ. ಕುಡಿದು ಮತ್ತೇರಿದಾಗ ಮತ್ತೊಂದು ರೀತಿ ಕೆಲಸ ಮಾಡುತ್ತಾನೆ. ಕೆಲಸ ಮಾಡುವ ವಿಚಾರದಲ್ಲಿ ತೆಗೆದುಕೊಂಡರೆ ಕುಡುಕನದೇ ಒಂದು ಕೈ ಮೇಲು ಎಂದು ಹೇಳಬೇಕು. ಆದರೆ ಬುದ್ಧಿ ಚೆನ್ನಾಗಿದ್ದಾಗ  ಗುರಿ  ಅಥವಾ ಉದ್ದೇಶಕ್ಕೆ ತಕ್ಕಂತೆ ಕೆಲಸ ಮಾಡುತ್ತಾನೆ. ಹಾಗೆ ಅಜ್ಞಾನಕ್ಕೆ ಸಿಕ್ಕಿದ ಬುದ್ಧಿ, ಕುಡುಕ ಬುದ್ಧಿಯಂತಾಗುತ್ತೆ. ಕೆಲಸವೇನೋ ಹಗಲು ರಾತ್ರೆ ನಡೆಯುತ್ತಿದ್ದರೂ ಗೊತ್ತುಗುರಿ ಇರುವುದಿಲ್ಲ. ಆದರೆ ವಿವೇಕಿಗಳ ಜೀವನ ಒಂದು ಧ್ಯೇಯದೊಡನೆ ಕೂಡಿರುತ್ತೆ.




To know more about Astanga Yoga Vijnana Mandiram (AYVM) please visit our Official Website, Facebook and Twitter pages