Saturday, December 31, 2022

ಶ್ರೀರಂಗ ವಚನಾಮೃತ (Sriranga Vachanamruta)

ಲೋಕವು ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳನ್ನು ಕೇಳುತ್ತೆ. ಆದರೆ ಅವುಗಳನ್ನು ಕೊಟ್ಟು ಜೊತೆಗೆ ಆತ್ಮವನ್ನೂ ಕೊಟ್ಟಿದ್ದಾರೆ. ಸಗುಣ ಪ್ರಪಂಚದಲ್ಲಿರುವವರಿಗೆ ಮೊದಲು ಅದನ್ನೇ ಕೊಟ್ಟು ಆಮೇಲೆ ಉಪಾಯವಾಗಿ, ಅದರ ಮೂಲಕವೇ ಅವರನ್ನು ಸತ್ಯಕ್ಕೆ ಕರೆದುಕೊಂಡು ಹೋಗಬೇಕು. ತೆಂಗಿನಕಾಯಿ ತೆಗೆದು ಕೊಂಡು ಬಾ ಎಂದರೆ ಕರಟ, ಚಗರೆ, ಮಟ್ಟೆ ಎಲ್ಲದರ ಜೊತೆಯಲ್ಲಿಯೇ ತರಬೇಕು. ಅವುಗಳ ಜೊತೆಯಲ್ಲಿ ಅಂಟಿಕೊಂಡೇ ಜೀವನದಲ್ಲಿ ಅದು ಇರುತ್ತೆ. ಆದರೆ ಪರಿಪಕ್ವವಾದಾಗ ಅದೆಲ್ಲಾ ಬಿಟ್ಟುಹೋಗುತ್ತೆ.




To know more about Astanga Yoga Vijnana Mandiram (AYVM) please visit our Official Website, Facebook and Twitter pages