Thursday, April 7, 2022

ಶ್ರೀರಂಗ ವಚನಾಮೃತ (Sriranga Vachanamruta)

ಬೀಜವನ್ನು ನೆಟ್ಟಾಗ ಎಲೆ, ಹೂವು, ಕಾಯಿ ಎಲ್ಲಕ್ಕೂ ಬೇರಿನೊಡನೆ ಸಂಬಂಧ ವಿದ್ದರೆ ಅದರ ಸೌಕುಮಾರ್ಯ ಸೌಗಂಧ್ಯಗಳೆಲ್ಲವೂ ಅಂತೆಯೇ ಇರುತ್ತದೆ. ಆದರೆ ನಾನೆಲ್ಲಿ? ಬೇರೆಲ್ಲಿ? ನನಗೂ ಅದಕ್ಕೂ ಸಂಬಂಧವಿಲ್ಲವೆಂದರೆ ಅದರ ಸಂಬಂಧ ತಪ್ಪಿದ ಮರುಕ್ಷಣದಿಂದಲೇ ಎಲೆಯಾಗಲೀ, ಮಿಡಿಯಾಗಲೀ, ಹೂವಾಗಲೀ ಬದಲಾಗಲಾರಂಭಿಸುತ್ತದೆ. ಅಂತೆಯೇ ಜೀವಿಯು ತಾನು ಚೆನ್ನಾಗಿರಬೇಕಾದರೆ ಎಲ್ಲವನ್ನೂ ತನ್ನ ಮೂಲಕ್ಕೆ ಕೊಟ್ಟುಕೊಳ್ಳಬೇಕು. ತಮ್ಮ ಜೀವನ ಸುಂದರವಾಗಬೇಕಾದರೆ ವಿಶ್ವಮೂಲನ ಅಡಿದಾವರೆಗಳಲ್ಲಿ ಅದು ಸಮರ್ಪಿತವಾಗಬೇಕು.


To know more about Astanga Yoga Vijnana Mandiram (AYVM) please visit our Official Website, Facebook and Twitter pages