Thursday, April 14, 2022

ಶ್ರೀರಂಗ ವಚನಾಮೃತ (Sriranga Vachanamruta)

ನಿತ್ಯನಾದ ಆತ್ಮನಿರುವನು. ಅವನಿಗೆ ಕರ್ಮವಿಶೇಷದಿಂದ ಬೇರೆಬೇರೆ ರೂಪಗಳು ಬರುವುವು. ಅವನು ಅಷ್ಟಪಾಶಗಳಿಗೆ ಸಿಕ್ಕಿಕೊಳ್ಳುವನು. ಸತ್ಕರ್ಮಗಳನ್ನಾಚರಿಸಿದಲ್ಲಿ ಪುಣ್ಯಗತಿಯುಂಟು. ಇಂದ್ರಿಯಸಂಯಮ ಮಾಡಿ ಆತ್ಮನು ಸರಿಯಾದ ದಾರಿಯಲ್ಲಿ ಹೋಗುವಂತೆ ಮಾಡಿದರೆ ಅವನಿಗೆ ಅಷ್ಟಪಾಶಗಳು ಕಳೆದು ಅವನು ತನ್ನ ಸ್ವರೂಪ ಪಡೆಯುವನು. ಇದು ಎಲ್ಲಾ ಜೀವಿಗಳೂ ಪಡೆದಿರುವ ಹಕ್ಕು.


To know more about Astanga Yoga Vijnana Mandiram (AYVM) please visit our Official Website, Facebook and Twitter pages